ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಹೆಸರಾಂತ ಸಂಗೀತ ವಿದ್ವಾಂಸರು,ಗಾಯಕ ಡಾ.ಕೆ.ಜೆ.ಯೇಸುದಾಸ್ರವರಿಗೆ ಭಾರತೀಯ ವಿದ್ಯಾಭವನ ಮತ್ತು ಪದ್ಮಭೂಷಣ ಡಾ.ಬಿ.ಸರೋಜದೇವಿ ರಾಷ್ಟ್ರೀಯ ಪ್ರಶಸ್ತಿ -೨೦೧೫ ಜಂಟಿಯಾಗಿ ಸನ್ಮಾನಿಸುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಪತ್ನಿ ಸಮೇತ ಸನ್ಮಾನವನ್ನು ಸ್ವೀಕರಿಸಿದ ಯೇಸುದಾಸ್ ಖುಷಿಯಿಂದ ತಾನು ಈ ಮಟ್ಟಕ್ಕೆ ಬರಲು ತಂದೆ,ತಾಯಿ ಬಂದು ಬಳಗದವರ ಪ್ರೇರಣೆಯಿಂದ. ಪ್ರವರ್ದಮಾನಕ್ಕೆ ಬರುತ್ತಿದ್ದ ಕಾಲದಲ್ಲಿ ಕೆಲವರು ಯೇಸುದಾಸ್ ಹೆಸರು ಕ್ರಿಶ್ಚಯನ್ ಮತಕ್ಕೆ ಸೇರಿದ್ದರಿಂದ ಬದಲಾಯಿಸಿಕೊಳ್ಳಲು ಸಲಹೆ ನೀಡಿದರು. ವಿಷಯವನ್ನು ತಂದೆಗೆ ತಿಳಿಸಿದಾಗ ವಾಪಸ್ಸು ಬಂದು ಬಿಡು ಎಂದು ಹೇಳಿದ್ದರು. ದೇವರ ಶಕ್ತಿಯಿಂದ ಮೇಲಕ್ಕೆ ಬಂದೆ. ಕ್ರಿಶ್ಚಯಿನ್ ಧರ್ಮಕ್ಕೆ ಸೇರಿದವನಾಗಿದ್ದರೂ ನಾನು ಭಾರತೀಯ. ದೇವರ ಮುಂದೆ ಎಲ್ಲರೂ ಒಂದೆ ಎಂದು ಶ್ಲೋಕ ಹಾಡಿ ಅಭಿಮಾನಿಗಳನ್ನು ರಂಜಿಸಿದರು.
ತಡವಾಗಿ ಆಗಮಿಸಿದ ವಸತಿ ಸಚಿವ ಅಂಬರೀಷ್ ಯೇಸುದಾಸ್ರಿಂದ ಚಿತ್ರರಂಗಕ್ಕೆ ಹೆಸರು ಬಂತು. ಚಿತ್ರರಂಗದಿಂದ ಅವರಿಗೆ ಹೆಸರು ಬಂದಿಲ್ಲ. ಭಾರತ ದೇಶ ಕಂಡ ಮಹಾನ್ ಕಲಾವಿದ. ಮದ್ರಾಸ್ನಿಂದ ಒಟ್ಟಿಗೆ ಬೆಂಗಳೂರಿಗೆ ಬಂದೆವು. ಗತಕಾಲದಲ್ಲಿ ನಾನು ಅವರು ಎಂದುಕೊಂಡು ಪ್ರಸಂಗಗಳು ನಡೆದಿವೆ ಅಂತ ನೆನಪು ಮಾಡಿಕೊಂಡು ಅವರು ನಮ್ಮೊಂದಿಗೆ ಇರುವುದು ನಮ್ಮಗಳ ಪುಣ್ಯ ಎಂದರು. ಪತ್ನಿ ಸುಮಲತಾ, ಪದ್ಮಭೂಷಣ ಬಿ.ಸರೋಜದೇವಿ, ಭಾರತೀಯ ವಿದ್ಯಾಭವನ ಅಧ್ಯಕರು ಈ ಸುಸಂದರ್ಭದಲ್ಲಿ ಹಾಜರಿದ್ದರು.